ಖಾಸಗಿ ಶಾಲೆಗಳ ಕಂತಿನ ಶಿಕ್ಷಣ ನಮಗೆ ಬೇಕೆ ?
“ನಮ್ಮ ಮಕ್ಕಳು ಜಗತ್ತನ್ನು ಬದಲಾಯಿಸಲು, ಉತ್ತಮ ಪ್ರಜೆಗಳಾಗಿ ಸದೃಢ ಸಮಾಜ ನಿರ್ಮಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೇ ಶಿಕ್ಷಣ ”
ಜಯಭಾರತ ಜನನಿಯ ತನುಜಾತೆ ಎಂಬಂತಹ ನಾಡಿನಲ್ಲಿ ಐತಿಹಾಸಿಕ ,ಭೌಗೋಳಿಕ, ಆರ್ಥಿಕ ವೈಶಿಷ್ಟ್ಯಗಳುಂಟು, ಅನೇಕ ಬುಡಕಟ್ಟು, ಜಾತಿ, ಮತ, ಸಂಪ್ರದಾಯ, ಇವುಗಳ ಸಮ್ಮಿಲನಗಳುಂಟು, ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮಾಧ್ಯಮ ಕನ್ನಡವೇ ಆಗಿರುವುದರಿಂದ ಶಾಲೆಗ ಳಲ್ಲಿ ಭಾಷಾ ಕಲಿಕೆ ಪೂರ್ಣ ಪ್ರಮಾಣದಲ್ಲಿರುವುದು ಹಾಗೂ ಅದರ ಮೇಲೆ ಹಿಡಿತ ಸಾಧಿಸುವುದು ಮುಖ್ಯ
ಭಾರತ ದೇಶವು ಶಿಕ್ಷಣದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಸುಸಂಸ್ಕೃತರಾಗಿದ್ದೆವು ಎಂಬದು ಇತಿಹಾಸ ಸಾರುತ್ತಿದೆ ಇದಕ್ಕೆ ಉದಾಹರಣೆ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳು. ಅಂದಿನ ಕಾಲದಲ್ಲೇ ಶಿಕ್ಷಣಕ್ಕೆ ಮಹತ್ವ ನೀಡಿದ್ದೆವು. ಕ್ರಿ.ಶ. 5 ನೇ ಶತಮಾನದ ಅವಧಿಯಲ್ಲಿ ನಮ್ಮ ಭಾರತದ ವಿಶ್ವವಿದ್ಯಾನಿಲಯಗಳು ಪ್ರಪಂಚದಲ್ಲೇ ಕಲಿಕೆಗೆ ಅತ್ಯುತ್ತಮ ಎಂದು ಪಾಶ್ಚಿಮಾತ್ಯರಿಂದ ದಾಖಲಿಸಲ್ಲಟ್ಟಿತ್ತು, ಅದರೆ ಕೆಲವು ಸಾಂದರ್ಭಿಕವಾಗಿ ವಿದೇಶಿಗರು ಸಹ ನಮ್ಮ ಶೈಕ್ಷಣಿಕ ವ್ಯವಸ್ಧೆಯನ್ನು ಪ್ರೋತ್ಸಾಹಿಸುತ್ತಿದ್ದರು.
ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಶಿಕ್ಷಣ ಪದ್ಧತಿ ಬದಲಾಣೆಯ ಮೂಲಕ ಕುಂಟುತ್ತಾ ಸಾಗುತ್ತಿದೆ. ನಮ್ಮ ಶಿಕ್ಷಣ ನಿರ್ಧಿಷ್ಟ ಗುರಿಗಳನ್ನು ಸಾಧಿಸುವಂ ತಿರಬೇಕು. ವಿದ್ಯಾರ್ಥಿಗಳ ಜ್ಞಾನವನ್ನು ಪರಿವರ್ತಿಸುವ, ಜೀವನ ಕೌಶಲ್ಯ ಮತ್ತು ಪಾತ್ರವನ್ನು ರೂಪಿಸುವ ಒಂದು ಸಾಧನವಾಗಬೇಕು. ಅದಕ್ಕೋಸ್ಕರ ನಮ್ಮ ಮಹಾತ್ಮ ಗಾಂಧಿಜೀಯವರು ‘’ Live as if you were to die tomorrow. Learn as if you were to live forever.” ಎಂದು ವಾಖ್ಯಾನಿಸಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಖಾಸಗಿ ಸಂಸ್ಧೆಗಳು ಪಾತ್ರ ಒಂದು ವಿಶಿಷ್ಟ ಮಾದರಿ ಮೂಲಕ ಹೆಸರು ಪಡೆದಿವೆ. ನಮ್ಮ ಶೈಕ್ಷಣಿಕ ವ್ಯವಸ್ಧೆ, ಪಠ್ಯ ಬೋಧನೆ ಹಾಗೂ ಪರೀಕ್ಷಾ ಕ್ರಮದಲ್ಲಿಯೂ ಇತರೆ ರಾಜ್ಯಗಳಿಗೆ ನಮ್ಮ ರಾಜ್ಯ ಮಾದರಿ, ಅದರೆ ನಮ್ಮ ಬದಲಾದ ಜಾಗತಿಕ ಮಟ್ಟಕೆ ತಕ್ಕಂತೆ ಶಿಕ್ಷಣವು ಸಹ ಪ್ರಸ್ತುತ ವ್ಯಾಪಾರ, ವ್ಯವಹಾರಗಳ ರೀತಿ ಉದ್ಧಿಮೆ ಹಾಗೂ ಬ್ಯಾಂಕ್ ಗೆ ಕಂತಿನ ರೂಪದಲ್ಲಿ ಪಾವತಿಸುವಂತೆ ನಮ್ಮ ಶಿಕ್ಷಣವು ಸಹ ಮಾರ್ಪಟ್ಟಿದೆ.
ನಮ್ಮ ರಾಜ್ಯವು ಶಿಕ್ಷಣದಲ್ಲಿ ಅನುದಾನಿತ ಹಾಗೂ ಅನುದಾನರಹಿತ ಎಂಬ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡ ಪರಿಣಾಮವಾಗಿಯೇ ಇಂದಿನ ಎಲ್ಲಾ ಅವಾಂತ ರಗಳಿಗೆ ಕಾರಣವಾಗಿದೆ. ಶಿಕ್ಷಣ ಇಂದು ಕಂತಿನ ರೂಪದಲ್ಲಿ ಪಾವತಿಸಿಕೊಂಡು ನಮ್ಮ ಮಕ್ಕಳಿಗೆ ಬೋದನೆ ನೀಡುತ್ತಿವೆ ಇದರ ಪರಿಣಾಮ ವಾಗಿಯೇ ಇಂದು ಶಿಕ್ಷಣದ ಉದ್ದೇಶವೇ ಬುಡಮೇಲು ಆಗ ತೊಡಗಿದೆ. ಪ್ರಸ್ತುತ ರಾಜ್ಯದಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಶೇ.1೦-15 ರಷ್ಟು ಹೆಚ್ಚಳವಾಗಿಸಿ, ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿವೆ. ಕೆಲವು ಖಾಸಗಿ ಶಾಲೆಗಳು ಪೋಷಕರಿಗೆ ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಶುಲ್ಕ ಪ್ರಮಾಣ ಹೆಚ್ಚಾಗಿದೆ ಎಂಬ ಮಾಹಿತಿ ನೀಡಿವೆ. ಖಾಸಗಿ ಶಾಲೆಗಳು ಪ್ರತಿ ವರ್ಷ ಶಾಲಾ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಅನಗತ್ಯ ಪಠ್ಯ ಚಟುವಟಿಗೆ, ವಾಹನ ಶುಲ್ಕ ಹೆಚ್ಚಾಗಿರುವ ಕಾರಣ ಶಾಲಾ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ. ಕೆಲವು ಖಾಸಗಿ ಶಾಲಾ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ನ್ಯಾಯಾಲಯದ ಮೂಲಕ ದಾವೆ ಹೂಡಿ ಬಗೆಹರಿಸಿಕೊಳ್ಳುತ್ತಿವೆ ಇಷ್ಟಾದರೂ ಸಹ ಮತ್ತೊಂದೆಡೆ ರಾಜ್ಯದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.
ಖಾಸಗಿ ಶಾಲೆಗಳು ತಮ್ಮ ಮೂಲ ಸೌಲಭ್ಯಗಳಿಗೆ ಅನುಗುಣವಾಗಿ ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಿಸಬಹುದು ಎಂಬ ಮಾಹಿತಿ ಆಯಾ ಶಾಲೆಗಳ ನಿರ್ಧಾರಕ್ಕೆ ಬಿಟ್ಟಿದ್ದು ಅದರೆ ಶುಲ್ಕ ಹೆಚ್ಚಳ ಮಾಡಿದರೆ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಕಾನೂನು ರೀತಿ ಪರಿಶೀಲನೆ ನಡೆಸಿ ಕ್ರಮ ವಹಿಸಬಹುದು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳು ಸಾಕಷ್ಟಿವೆ. ಮಗುವಿನ ಶಿಕ್ಷಣ ಪ್ರಾರಂಭವಾಗುವುದು ಮನೆಯಲ್ಲಿ ಆನಂತರ ಶಾಲೆಯಲ್ಲಿ. ನಮ್ಮ ದೇಶದಲ್ಲಿ ಶಿಕ್ಷಣ ಖಾಸಗೀಕರಣಗೊಂಡಿದೆ. ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಮತ್ತು ಇತರೆ ಸೌಲಭ್ಯಗಳನ್ನು ನೀಡುತ್ತವೆ ಎಂಬ ಮಾತು ಸುಳ್ಳು ಅದರೆ ಖಾಸಗಿ ಶಾಲೆಗಳು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತುಂಬಾ ದುಬಾರಿಯಾಗಿವೆ.
ನಮ್ಮ ದೇಶದ ಶಿಕ್ಷಣ ವ್ಯವಸ್ಧೆಯಲ್ಲಿ 14 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಕಡ್ಡಾಯ ಗೊಳಿಸಿದೆ ಆದರೆ ಬಡ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುವ ಮೂಲಕ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಇರುವಂತಹ ನಮ್ಮ ಪ್ರಾಥ ಮಿಕ ಶಿಕ್ಷಣ ಅನೇಕ ಸಮಸ್ಯೆಗಳಿಂದ ಕೊಡಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ. ಇದರಿಂದ ಮಕ್ಕಳು ಶಾಲೆ ಬಿಟ್ಟು ಅನಕ್ಷರಸ್ಥರಾ ಗುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಸದೃಢವಾಗಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಇನ್ನೂ ಕ್ರಮ ಕೈಗೊಂಡಿಲ್ಲ ?
Education in the most powerful weapon which you can use to change the world.” Nelson Mandela. ಹೇಳುವ ಮೂಲಕ ಶಿಕ್ಷಣವು ನಮಗೆ ಜ್ಞಾನವನ್ನು ಉಂಟುಮಾಡಿ, ವಿದ್ಯಾರ್ಥಿಗಳ ಕನಸುಗಳನ್ನು ಬೆಳೆಸುವ ಮತ್ತು ಜವಾಬ್ದಾರಿಯುತ ಜೀವನವನ್ನು ಮೂಡಿಸುವ ಸಾಮರ್ಥ್ಯವನ್ನು ಪ್ರಸ್ತುತ ಪಡಿಸುತ್ತದೆ. ಪ್ರಸ್ತುತ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿಲ್ಲ ಎಂಬದು ಕೆಲವು ಶಿಕ್ಷಣ ತಜ್ಞರ ವಾದ. ನಮ್ಮ ಶಿಕ್ಷಣವು ಕನಿಷ್ಠ ಸಮಯದಲ್ಲಿ ಗರಿಷ್ಟ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಾದ್ಯವಾಗಿಲ್ಲ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಸಹ ಶಿಕ್ಷಣ ವಿಚಾರದಲ್ಲಿ ಭಾರತ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಶಿಕ್ಷಣವನ್ನು ಸುಧಾರಿಸಲು ಅನೇಕ ಪ್ರಯತ್ನಗಳು ಮಾಡಿದರೂ ಉತ್ತಮ ಫಲಿತಾಂಶ ಇಲ್ಲದಂತಾಗಿದೆ.

”ವಿದ್ಯಾರ್ಧಿಗಳ ಸರ್ವತೋಮುಖ ವಿಕಸನವೇ ಶಿಕ್ಷಣ, ಶಿಕ್ಷಣ ಪ್ರಾಪಂಚಿಕ ಜ್ಞಾನವನ್ನು ನೀಡಿ ಬದುಕಿಗೆ ಸಿದ್ಧಗೊಳಿಸುವುದೇ ಶಿಕ್ಷಣ. ಆರು ವರ್ಷದ ಅವದಿ ಯಿಂದ ಶುರುವಾಗಿ ಪ್ರಾಯದ ವರೆಗೆ ಔಪಚಾರಿಕ ಶಿಕ್ಷಣ ಆರಂಭಗೊಳ್ಳುತ್ತದೆ. ಆರು ವರ್ಷಗಳ ಮೊದಲು ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಶಿಕ್ಷಣವನ್ನು ಎಷ್ಟು ನೀಡಬೇಕು ಎಂಬುದು ಈಗ ಚರ್ಚಿತವಾದ ವಿಷಯ. ನಮ್ಮ ಪೂರ್ವಜರು ತಮ್ಮ ಮಕ್ಕಳಿಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಶಿಕ್ಷಣ ಕೊಡುತ್ತಿದ್ದರು. ಈಗ ಕಾಲ ಬದಲಾಗಿ ಲೌಕಿಕ ಮತ್ತು ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಇಂದು ಪಡೆಯುತ್ತಿರುವ ಲೌಕಿಕ ಮತ್ತು ತಾಂತ್ರಿಕ ಶಿಕ್ಷಣ ಕೇವಲ ವಿಷಯಾಧಾರಿತ ಮಾತ್ರ. ಉನ್ನತ ಶಿಕ್ಷಣವೆಂದರೆ ನಿರ್ದಿಷ್ಟ ವಿಷಯದಲ್ಲಿ ಪರಿಣತಿ ಪಡೆದು, ಗರಿಷ್ಟ ಮಟ್ಟದ ಅಂಕಗಳಿ ಸುವುದು. ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಅರಸುವುದು. ಅದರಲ್ಲೂ ಗರಿಷ್ಠ ವೇತನ ಪಡೆಯುವುದೇ ಹೆಚ್ಚು ಜನರ ಗುರಿಯಾಗಿರುವ ನಮ್ಮ ಶಿಕ್ಷಣಕ್ಕೇ ಇಂದು ಹೆಚ್ಚು ಜನರು ಮುಗಿ ಬೀಳುತ್ತಿದ್ದಾರೆ
ನಮ್ಮ ಮಕ್ಕಳಿಗೆ ಕಲಿಕೆ ಅವಧಿಯಲ್ಲಿ ಅಗತ್ಯ ಹಾಗೂ ಪೂರಕವಾದ ಶಿಕ್ಷಣ ಕೊಟ್ಟಾಗ ಮಾತ್ರ ಮಗು ತನ್ನ ಜೀವನದಲ್ಲಿ ಮೌಲ್ಯಯುತ ನಡವಳಿಕೆ ಹೊಂದಲು ಸಾಧ್ಯ. ಆತ ಶಿಕ್ಷಣ ಪಡೆದು ಶೀಲವಂತ ಮತ್ತು ಮೌಲ್ಯಯುತ ಬದುಕು ಬಲ್ಲವನ್ನಾಗಿರಬೇಕು ಅದರೆ ನಮ್ಮ ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದೆ ಪೋಷಕರು ಶಾಲೆಗೆ ಬೇಕಾದಷ್ಟು ಹಣವನ್ನು ಕಂತಿನಲ್ಲಿ ಪಾವತಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ದೇಶದ ಭವಿಷ್ಯ ಮತ್ತು ಮಕ್ಕಳ ಬದುಕಿಗೆ ಶಿಕ್ಷಣವು ಸಾತ್ವಿಕತೆ, ಮಾನವೀಯ ಮೌಲ್ಯ, ಸೇವಾ ಮನೋಭಾವ ಮತ್ತು ಸಂಸ್ಕಾರ ತುಂಬಬಲ್ಲ ಶಿಕ್ಷಣ ನಮ್ಮಗೆ ಬೇಕು”.
ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಹಲವಾರು ಸಮಸ್ಯೆಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕಳಪೆ ಮೂಲ ಸೌಕರ್ಯ, ವಿದ್ಯಾರ್ಥಿಗಳನ್ನು ಪ್ರೋತ್ಸಾ ಹಿಸುವ ವಾತಾವರಣ ಕಡಿಮೆ, ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಮೂಲ ಸೌಕರ್ಯಗಳೇ ಇಲ್ಲ, ಮಕ್ಕಳಿಗೆ ಉಪಯೋಗಿಸಲು ಸರಿಯಾದ ಶೌಚಾಲಯ, ಕುಡಿಯುವ ನೀರು ಮತ್ತು ಅಚ್ಚುಕಟ್ಟಾದ ತರಗತಿ ಕೊಠಡಿಗಳಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗಿರುವ ಕಾರಣ ವಿದ್ಯಾರ್ಥಿ ಗಳು ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸುತ್ತಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಶಾಲೆ ಬಿಡುವ ಪ್ರಮಾಣ ಹೆಚ್ಚಾಗಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇನ್ನೂ ಸಾದ್ಯವಾಗಿಲ್ಲ ಆದರೂ ಶಿಕ್ಷಣ ವ್ಯಾಪಾರೀಕರಣಕ್ಕೆ ಇನ್ನೂ ಕಡಿವಾಣ ಹಾಕಲು ಯಾವುದೇ ಸರ್ಕಾರ ದಿಂದ ಸಾದ್ಯವಾಗಿಲ್ಲ.
ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಶಿಕ್ಷಣ ಅವ್ಯವಸ್ಥೆಯಿಂದ ಕೂಡಿದೆ. ಇನ್ನೊಂದು ಸಮಸ್ಯೆ ಎಂದರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಹಣದ ಕೊರತೆ, ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಶಿಕ್ಷಣದ ಅಭಿವೃದ್ಧಿಗೆ ಅನುದಾ ನ ಬಿಡುಗಡೆ ಮಾಡುವುದು ಅತ್ಯಗತ್ಯವಾದರೂ ಕೆಲವು ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದು ತುಂಬಾ ಕಷ್ಟಕರವಾಗಿದೆ. ಭಾರತದಲ್ಲಿ ೧೪ ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಿಕ್ಷಣವನ್ನು ಮೂರು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ. ಭಾರತವು ೧೪ ವರ್ಷ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತಿದೆ.
ಭಾರತದಲ್ಲಿ ಹಲವಾರು ಪ್ರಯತ್ನಗಳ ಹೊರತಾಗಿಯೂ, ಶಿಕ್ಷಣ ವ್ಯವಸ್ಥೆಯು ಇನ್ನೂ ಕೆಳಮಟ್ಟದಲ್ಲಿಯೇ ಉಳಿದಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಅಭಿವೃದ್ಧಿ ಕೊರತೆಗೆ ಹಲವು ಕಾರಣಗಳಿವೆ. ಭಾರತದಲ್ಲಿ ಶಿಕ್ಷಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಹಣದ ಕೊರತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಕಡಿಮೆ ಅನುದಾನದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈಡೇರುತ್ತಿಲ್ಲ. ಮೂಲಸೌಕರ್ಯಗಳು ಕಳಪೆಯಾಗಿರುವುದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಪಾಠ ಕಲಿಯಲು ಸಾಧ್ಯವಾಗುತ್ತಿಲ್ಲ. ಅನೇಕ ಕಾರಣಗಳಿಂದಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿ ಯುತ್ತಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚುತ್ತಿದೆ, ಅನೇಕ ಉಪಕ್ರಮಗಳನ್ನು ತೆಗೆದುಕೊಂಡರೂ ನಾವು ನೂರಕ್ಕೆ ನೂರು ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮುಂದುವರಿದ ದೇಶಗಳು ಶೇ.೧೦೦% ಸಾಕ್ಷರವಾಗಿವೆ ಮತ್ತು ಅದು ಅವರ ಯಶಸ್ಸಿನ ರಹಸ್ಯವಾಗಿದೆ. ನಮ್ಮ ಸರ್ಕಾರವು ಎಲ್ಲಾ ಮಕ್ಕಳಿಗೆ ೧೮ ವರ್ಷದವರೆಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಮೊದಲಿನ ೧೪ ವರ್ಷವನ್ನು ಹೆಚ್ಚಿಸಬೇಕು. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಡೆಯಬೇಕು.
ಶುಲ್ಕಕ್ಕೆ ಕೊಡುವ ಗಮನ ಮಕ್ಕಳ ಸುರಕ್ಷತೆಗೆ ಏಕೆ ಕೊಡುತ್ತಿಲ್ಲ ?
ಮುಂದುರೆದು ಖಾಸಗಿ ಶಾಲೆಗಳು ವಾಹನ ಶುಲ್ಕಕ್ಕೆ ಕೊಡುವ ಗಮನವನ್ನು ಸುರಕ್ಷತೆಗೇಕೆ ಕೊಡುವುದಿಲ್ಲ. ಇದರಿಂದ ಹಲವು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರಗಳು ನಿರ್ಧಿಷ್ಟ ಕ್ರಮಕ್ಕೆ ಮುಂದಾಗಿಲ್ಲ ಹಾಗೆಯೇ ಖಾಸಗಿ ಶಾಲೆಗಳು ತಮ್ಮ ಶಾಲಾ ಶುಲ್ಕ ವಿವರಗಳನ್ನು ಬಹಿರಂಗವಾಗಿ ಪ್ರದರ್ಶಿಸಬೇಕು ಎಂಬುದು ಮಾನದಂಡವಾದರೂ ಯಾವುದೇ ಖಾಸಗಿ ಶಾಲೆಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಇಂತಹ ಮಾನದಂಡಗಳಿಗೆ ಮತ್ತು ಆದೇಶಗಳಿಗೆ ಖಾಸಗಿ ಶಾಲೆಗಳು ಬೆಲೆ ಕೊಡುತ್ತಿಲ್ಲ. ಕೆಲವು ಖಾಸಗಿ ಶಾಲೆಗಳ ವಾಹನ ಸುರಕ್ಷತೆ ಹಾಗೂ ಚಾಲಕ ಮತ್ತು ಚಾಲನೆಗೆ ಸಂಬಂಧಿಸಿದಂತೆ ಇರುವ ಕಾಯಿದೆಗಳ ಜಾರಿಗೆ ನಿಗಾ ವಹಿಸಲು ಪ್ರಯತ್ತಿಸುತ್ತಿಲ್ಲ. ಶಾಲೆಗಳಲ್ಲಿ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಖಾಸಗಿ ವಾಹನಗಳ ವಾರಸುದಾರರನ್ನೊಳಗೊಂಡ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸಬೇಕು ಎಂಬುದು ಸರಕಾರಿ ಅಧಿಸೂಚನೆ ಇದ್ದರೂ ಸಹ ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ.
ಒಟ್ಟಾರೆ ನಮ್ಮ ಜನ ಪ್ರತಿನಿಧಿಗಳ, ಅಧಿಕಾರಿಗಳ ಮಕ್ಕಳು ಕೂಡ ಖಾಸಗಿ ಶಾಲೆಗೆ ಹೋಗುವುದನ್ನು ಬಿಟ್ಟು ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಓದುವ ನಿಯಮ ಜಾರಿಯಾಗಿ ರಾಜ್ಯದಲ್ಲಿ ಆರ್ಟಿಇ ಮೂಲಕ ಖಾಸಗಿ ಶಾಲೆಗಳನ್ನು ಉದ್ಧರಿಸುತ್ತಿರುವ ಕಾನೂನನ್ನು ಹಿಂಪಡೆದಾಗ ಮಾತ್ರ ಸರ್ಕಾರಿ ಶಾಲೆಗಳು ತನ್ನಿಂದ ತಾನೇ ಸುಧಾರಿಸುತ್ತವೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವವರಿಗೆ ಮಾತ್ರ ಸಾಲ, ಸಬ್ಸಿಡಿ, ಪರಿಹಾರ, ಅನುದಾನ, ಉದ್ಯೋಗ ಇತ್ಯಾದಿ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು. ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಕಲ್ಪಿಸುವ ನಿರ್ಧಾರ ಕೈಕೊಂಡರೆ ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತದೆ. ಇಂತಹ ಕೆಲಸ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸಾಧ್ಯವಾ ಗಬೇಕು ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇಂಥದೊಂದು ದೃಢ ನಿರ್ಧಾರ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವಂತ ಜವಾಬ್ದಾರಿ ಎಲ್ಲಾ ನಾಗರೀಕದ್ದರಾಗಿರಬೇಕು.
ನಮ್ಮ ಶಿಕ್ಷಣ ವ್ಯವಸ್ಥೆಯು ಇಂದು ಸಂಕೀರ್ಣ, ವಿಕಸನಗೊಳ್ಳುತ್ತಿರುವ ಕಲಿಕಾ ವಿಷಯಗಳ ಮೇಲೆ ಒತ್ತು ನೀಡುವುದು ಮತ್ತು ಗ್ರಾಮೀಣ-ನಗರ ಶಿಕ್ಷಣ ವಿಭಜನೆ, ಪರೀಕ್ಷೆಯ ಒತ್ತಡದಂತಹ ಸವಾಲುಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿದೆ ಆದಾಗ್ಯೂ ಕಾಲಕಾಲಕ್ಕೆ ತಕ್ಕಂತೆ ನಡೆಯುತ್ತಿರುವ ಸುಧಾರಣೆಗಳು ಮತ್ತು ಸಮಗ್ರ ಶಿಕ್ಷಣದ ಮೇಲೆ ಕೇಂದ್ರೀಕರಿಸುವುದರೊಂದಿಗೆ, ರಾಷ್ಟ್ರದ ಬೆಳವಣಿಗೆಗೆ, ಕೊಡುಗೆ ನೀಡುವ ಸುಸಂಬದ್ಧ ವಿದ್ಯಾರ್ಥಿಗಳನ್ನು ಪೋಷಿಸುವ ನಿಟ್ಟಿನಲ್ಲಿ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಣ ಅಗತ್ಯ.
ಎಸ್.ಪಟೇಲ್.